ವಾಯುಪ್ರಕೋಪ (gas ) ಪರಿಹರಿಸಲು ಜೀರಿಗೆಯನ್ನು ಬಳಸುವದು ತಿಳಿದೇ ಇದೆ. ಇದನ್ನು ಕಷಾಯ ರೂಪದಲ್ಲಿ ಸೇವಿಸಲು ಮನಸ್ಸಿಲ್ಲದೆ ಇದ್ದಾಗ ದೋಸೆಯಲ್ಲಿ ಮಿಶ್ರಣಮಾಡಿ ಸೇವನೆ ಮಾಡಬಹುದು. ಜೀರಿಗೆ ಮನೆಯ ಅಡುಗೆಮನೆಯಲ್ಲಿ ಶಕ್ತಿ ರೂಪದಲ್ಲಿ ಡಬ್ಬಿಯಲ್ಲಿ ಕುಳಿತಿರುತ್ತದೆ!
ಅಗತ್ಯ:
ಜೀರಿಗೆ-೪ ಚಮಚ
ಕೊತ್ತಂಬರಿ ಸೊಪ್ಪು- ೧/೨ ಹಿಡಿ
ಮೆಣಸು ಕಾಳು- ೧ ಚಮಚ
ಶುಂಟಿ ೧/೨ ಇಂಚು
ದೋಸೆ ಹಿಟ್ಟು- ೪ ಕಪ್
ಉಪ್ಪು
ಮಾಡುವ ಕ್ರಮ:
ಜೀರಿಗೆ ಹುರಿದಿಡಿ.
ಇದನ್ನು, ಕೊತ್ತಂಬರಿ ಸೊಪ್ಪು, ಮೆಣಸು ಕಾಳು, ಶುಂಟಿ, ಸೇರಿಸಿ ತರಿ ತರಿಯಾಗಿ ಪುಡಿ ಮಾಡಿ.
ಪುಡಿಯನ್ನು ದೋಸೆ ಹಿಟ್ಟಿಗೆ ಸೇರಿಸಿ.ಉಪ್ಪು ಹಾಕಿ .ದೋಸೆ ಸಿದ್ಧಪಡಿಸಿ.
ಚಂದ್ರಿಕಾ ಹೆಗಡೆ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ