30 ನವೆಂಬರ್ 2011

ಕೆಂಪು ಕ್ಯಾಬೇಜ್ ಮೊಸರು ಭಜ್ಜಿ

ಕೆಂಪು ಕ್ಯಾಬೇಜ್ - ೧/೨ ಹೆಚ್ಚಿದ್ದು
ಮೊಸರು - ೧ ಬಟ್ಟಲು
ಹಸಿಮೆಣಸಿನ ಕಾಯಿ-೧ ಹೆಚ್ಚಿದ್ದು
ಈರುಳ್ಳಿ-೧ ಹೆಚ್ಚಿದ್ದು
ಉಪ್ಪು ರುಚಿಗೆ ತಕ್ಕಸ್ಟು
ಸಕ್ಕರೆ ೧/೨ ಚಮಚ
ಕೊತ್ತಂಬರಿ ಸೊಪ್ಪು- ೧/೨ ಹಿಡಿ

ಕ್ಯಾಬೇಜ್, ಈರುಳ್ಳಿ,ಹಸಿಮೆಣಸಿನ ಕಾಯಿ, ಕೊತ್ತಂಬರಿ ಸೊಪ್ಪು ಎಲ್ಲವನ್ನು ಸಣ್ಣದಾಗಿ ಹೆಚ್ಚಿ. ಇದಕ್ಕೆ ಉಪ್ಪು ಸಕ್ಕರೆ, ಮೊಸರು ಸೇರಿಸಿ. ಯಾವದಾದ್ರು ರೈಸ್  ಗೆ ಜೊತೆಯಾಗುವದು.


ಚಂದ್ರಿಕಾ ಹೆಗಡೆ

ಬೀಟ್ ರೂಟ್ ಮೊಸರು ಭಜ್ಜಿ

ಬೀಟ್ ರೂಟ್ - ೧--ತುರಿದುಕೊಳ್ಳಿ.
ಮೊಸರು-೧ ಬಟ್ಟಲು
ತೆಂಗಿನ ತುರಿ೧/೨ ಬಟ್ಟಲು
ಜೀರಿಗೆ ೧/೨ ಚಮಚ
ಎಣ್ಣೆ-೩ ಚಮಚ
ಉಪ್ಪು
ಹಸಿಮೆಣಸಿನ ಕಾಯಿ-೧ 
  1. ಬೀಟ್ ರೂಟ್  ತುರಿಯನ್ನು ೨ ಚಮಚ ಎಣ್ಣೆಯೊಂದಿಗೆ ಹುರಿದಿಟ್ಟುಕೊಳ್ಳಿ.
  2. ತೆಂಗಿನ ತುರಿ+ಜೀರಿಗೆ+ಉಪ್ಪು ಹಾಕಿ ರುಬ್ಬಿ.
  3. ರುಬ್ಬಿದ ಮಿಶ್ರಣಕ್ಕೆ ಬೀಟ್ ರೂಟ್  ಸೇರಿಸಿ.
  4. ಮೊಸರನ್ನು ಹಾಕಿ.
  5.  ೧ಚಮಚ ಎಣ್ಣೆಗೆ ಸಾಸಿವೆ , ಹಸಿಮೆಣಸಿನ ಕಾಯಿ ಒಗ್ಗರಣೆ  ನೀಡಿ.

ಅನ್ನದ ಜೊತೆ ಆರೋಗ್ಯಕ್ಕೆ ಹಿತಕರ ಭಜ್ಜಿ. ಬೇಸಗೆಯಲ್ಲಂತೂ... ತಂಪು ತಂಪು.....


ಚಂದ್ರಿಕಾ ಹೆಗಡೆ

ಹರಿವೆ ಸೊಪ್ಪಿನ ಮೊಸರು ಭಜ್ಜಿ


ಹರಿವೆ ಸೊಪ್ಪು- ೧ ಕಟ್ಟು
ಈರುಳ್ಳಿ-೨
ತೆಂಗಿನ ತುರಿ- ೧/೨ ಕಪ್
ಹಸಿಮೆಣಸಿನ ಕಾಯಿ-೧
ಎಣ್ಣೆ ೨ ಚಮಚ
ಸಾಸಿವೆ ಒಗ್ಗರಣೆಗೆ 
ಉಪ್ಪು
ಮೊಸರು- ೧ ಬಟ್ಟಲು
ಅರಿಸಿನ ಚಿಟಿಕೆ
ಬೆಲ್ಲ-೧/೨ ಚಮಚ


  1. ಹರಿವೆ ಸೊಪ್ಪನ್ನು,( ಅದರಲ್ಲೂ ಕೆಂಪು ಹರಿವೆ ಸೊಪ್ಪು) ತೊಳೆದು ಸಣ್ಣಗೆ ಹೆಚ್ಚಿ ಸ್ವಲ್ಪ ಎಣ್ಣೆ ಹಾಕಿ ಬೇಯಿಸಿ...
  2. ಹಸಿಮೆಣಸಿನಕಾಯಿ, ತೆಂಗಿನ ತುರಿ, ಉಪ್ಪು ಹಾಕಿ ರುಬ್ಬಿ.
  3. ಈ ಮಿಶ್ರಣಕ್ಕೆ ಬೇಯಿಸಿ- ಆರಿದ  ಸೊಪ್ಪು, ಸಣ್ಣಗೆ ಹೆಚ್ಚಿದ ಈರುಳ್ಳಿ, ಬೆಲ್ಲ, ಮೊಸರು, ಹಾಕಿ.
  4. ಇದಕ್ಕೊಂದು ಸಾಸಿವೆ, ಅರಿಸಿನದ  ಒಗ್ಗರಣೆ ನೀಡಿ.

ಉತ್ತಮ ಆರೋಗ್ಯಕ್ಕೆ  ಉತ್ತಮ ಅಡುಗೆ....


ಚಂದ್ರಿಕಾ ಹೆಗಡೆ

ಉದ್ದಿನ ಬೇಳೆ ಚಟ್ನಿ

ಉದ್ದಿನ ಬೇಳೆ -೨ ಚಮಚ
ತೆಂಗಿನ ತುರಿ- ೧ ಬಟ್ಟಲು
ಹಸಿಮೆಣಸಿನ ಕಾಯಿ ೨ ( ತುಂಬಾ ಖಾರ ಇದ್ದರೆ ೧)
ಎಣ್ಣೆ ೨ ಚಮಚ 
ಸಕ್ಕರೆ ಕಾಲು ಚಮಚ, ಉಪ್ಪು 
ಒಗ್ಗರಣೆಗೆ ಸಾಸಿವೆ

೧ ಚಮಚ ಎಣ್ಣೆಯಲ್ಲಿ ಉದ್ದಿನ ಬೇಳೆ , ಹಸಿಮೆಣಸನ್ನು ಹುರಿಯಿರಿ.
ಇದನ್ನು ತೆಂಗಿನ ತುರಿ+ಸಕ್ಕರೆ + ಉಪ್ಪು + ಸ್ವಲ್ಪ ನೀರು ಹಾಕಿ ರುಬ್ಬಿ.
ಇದಕ್ಕೆ ಸಾಸಿವೆ ಒಗ್ಗರಣೆ ಇಡಿ...!


ಇಡ್ಲಿ, ಚಪಾತಿ/ಪರೋಟ/ತಾಲಿಪಿಟ್ಟು, ದೋಸೆ ಜೊತೆಗೆ  ಸವಿಯುವದು...... ನಮ್ಮ ಜವಾಬ್ದಾರಿ....

ಚಂದ್ರಿಕಾ ಹೆಗಡೆ

ತರಕಾರಿ ತುಂಬಿದ ಪರೋಟ

ಗೋದಿ ಹಿಟ್ಟು ಅಥವಾ ಮೈದಾ- ೧ ೧/೨ ಕಪ್
ಅಕ್ಕಿ ಹಿಟ್ಟು-೩ ಕಪ್
ಉಪ್ಪು
ಎಣ್ಣೆ
ಮೂಲಂಗಿ-೧ 
ಈರುಳ್ಳಿ-೨
ಕ್ಯಾಪ್ಸಿಕಂ  -1
ಕ್ಯಾರೆಟ್-೨
ಮೆಣಸಿನ ಪುಡಿ-೨ ಚಮಚ
ಜೀರಿಗೆ -೨ ಚಮಚ

  1. ಗೋದಿ ಹಿಟ್ಟನ್ನು ಚಪಾತಿ ಹಿಟ್ಟಿನ ಹದಕ್ಕೆ ಕಲೆಸಿ.(ಸ್ವಲ್ಪ ಉಪ್ಪು ಹಾಕಿ)
  2. ಮೂಲಂಗಿ, ಕ್ಯಾರೆಟ್  ಸಿಪ್ಪೆ ತೆಗೆದು ತುರಿದುಕೊಳ್ಳಿ.
  3. ಈರುಳ್ಳಿ , ಕ್ಯಾಪ್ಸಿಕಂ ಸಣ್ಣಗೆ ಹೆಚ್ಚಿ.
  4. ೨ ಚಮಚ ಅಕ್ಕಿ ಹಿಟ್ಟನ್ನು ಒಂದು ಪಾತ್ರೆಗೆ ಹಾಕಿ ಕಲಸಿ... ಕುದಿಸಿ, ಗಂಜಿಯ ತರಹ ಮಾಡಿ. ಇದಕ್ಕೆ ಹೆಚ್ಚಿದ, ತುರಿದ ತರಕಾರಿ, ಉಪ್ಪು, ಉಳಿದ ಅಕ್ಕಿ ಹಿಟ್ಟನ್ನು ಸೇರಿಸಿ ಕಲಸಿ.
  5. ಜೀರಿಗೆ ,  ಮೆಣಸಿನ ಪುಡಿ  ಸೇರಿಸಿ ಕಲಸಿ.
  6. ಕಲಸಿಟ್ಟ ಗೋದಿ ಹಿಟ್ಟಿನಿಂದ ಚಿಕ್ಕ ಉಂಡೆಗಳನ್ನಾಗಿ  ಮಾಡಿ ಸ್ವಲ್ಪ ಲಟ್ಟಿಸಿ... ಅದರೊಳಗೆ ಹೋಳಿಗೆ ಹೂರಣ   ತುಂಬುವ ಹಾಗೆ  ಅಕ್ಕಿ ತರಕಾರಿ   ಮಿಶ್ರಣವನ್ನು ತುಂಬಿ ಲಟ್ಟಿಸಿ...
  7. ಎರಡು ಬದಿಯಲ್ಲಿ ಎಣ್ಣೆ ಹಾಕಿ ಬೇಯಿಸಿ..

ರುಚಿಗೆ... ರುಚಿಯೇ ಸಾಟಿ.....

ಚಂದ್ರಿಕಾ ಹೆಗಡೆ

ಹರಿವೇ ಸೊಪ್ಪಿನ ಫ್ರೈ

ಹರಿವೆ ಸೊಪ್ಪು- ೧ ಕಟ್ಟು
ಬೆಳ್ಳುಳ್ಳಿ-೬ (ಸಣ್ಣಗೆ ಕತ್ತರಿಸಿ)
ಹಸಿಮೆಣಸು-೧
ಎಣ್ಣೆ ೨ ಚಮಚ
ಉಪ್ಪು 

ಹರಿವೆ ಸೊಪ್ಪನ್ನು ಚೆನ್ನಾಗಿ ತೊಳೆಯಿರಿ.....ಸೊಪ್ಪನ್ನು ಬಿಡಿಸಿ... ಆದ್ರೆ ಹೆಚ್ಚ ಬಾರದು....ಸೊಪ್ಪನ್ನು ಕೈಯಲ್ಲೇ ಎಲೆ ಎಳೆಯಾಗಿ  ಬಿಡಿಸಿ. ಬಾಣಲೆಗೆ ೨ ಚಮಚ ಎಣ್ಣೆ ಹಾಕಿ. ಬೆಳ್ಳುಳ್ಳಿ ಹುರಿದು, ಹಸಿಮೆಣಸಿನ ಕಾಯಿ , ಸೊಪ್ಪನ್ನು  ಸೇರಿಸಿ, ಸಣ್ಣ ಉರಿಯಲ್ಲಿ ೫-೬ ನಿಮಿಷ ಬೇಯಿಸಿ... ಉಪ್ಪು ಸೇರಿಸಿ....

ಸರಳವಾದರೂ.... ಒಮ್ಮೆ ಈ ಪಲ್ಯವನ್ನು ಮಾಡಿದವರು....ಇದನ್ನು ಮಾಡಲೆಂದೇ ಸೊಪ್ಪನ್ನು ತರುವದು ಸಹಜವೇ,,,,!

ಚಂದ್ರಿಕಾ ಹೆಗಡೆ

29 ನವೆಂಬರ್ 2011

ಆಲೂ- ಬೇಬಿ ಕಾರ್ನ್ ಮಸಾಲ..(ಖಾರ)

ಆಲೂ- ೩-೪ (ಬೇಯಿಸಿ ಹಿಸುಕಿದ್ದು)
ಈರುಳ್ಳಿ ೧ ಹೆಚ್ಚಿದ್ದು
ಕೊತ್ತಂಬರಿ ಸೊಪ್ಪು
ಎಣ್ಣೆ ೨ ಚಮಚ
ಅರಿಸಿನ - ಚಿಟಿಕೆ
ಟಮೇಟೋ- ೨ ಹೆಚ್ಚಿದ್ದು
ಬೇಬಿ ಕಾರ್ನ್-೪-೫ ಬೇಯಿಸಿ ಸಣ್ಣದಾಗಿ ಹೆಚ್ಚಿದ್ದು.
ಒಣ ಮೆಣಸಿನ ಕಾಯಿ- ೩-೪- ೧/೨ ಗಂಟೆ ನೆನಸಿ... ರುಬ್ಬಿ.
ಉಪ್ಪು ರುಚಿಗೆ 
ಕಿಚನ್ ಕಿಂಗ್ ಮಸಾಲ - ೨ ಚಮಚ 


ಎಣ್ಣೆಯಲ್ಲಿ ಈರುಳ್ಳಿ ಹುರಿದು... ಟೊಮೇಟೊ ಬೇಯಿಸಿ. ಅರಿಸಿನ ಪುಡಿ +  ರುಬ್ಬಿದ ಖಾರ + ಉಪ್ಪು+ ಕಿಚನ್ ಕಿಂಗ್ ಮಸಾಲ + ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಬೇಯಿಸಿ...ಅದಕ್ಕೆ ಬೇಬಿ ಕಾರ್ನ್ + ಆಲೂ + ಬೇಕಾದ್ರೆ ಇನ್ನು ಸ್ವಲ್ಪ ಉಪ್ಪು  ಹಾಕಿ ಸ್ವಲ್ಪ ನೀರು ಹಾಕಿ ೩ ನಿಮಿಷ ಬೇಯಿಸಿ,,,,

ಪಾಲಕ್ ಪರೋಟದ ಜೊತೆ  ....ಸವಿದ ಕ್ಷಣ 


ಚಂದ್ರಿಕಾ ಹೆಗಡೆ

ಪಾಲಕ್ ಪರೋಟ

ಗೋದಿ ಹಿಟ್ಟು- ೨ ಕಪ್
ಪಾಲಕ್- ೨ ಕಟ್ಟು
ಜೀರಿಗೆ ಪುಡಿ ೧ ಚಮಚ
ಮೆಣಸಿನ ಪುಡಿ ೧ ಚಮಚ
ಅರಿಸಿನ ಪುಡಿ- ಚಿಟಿಕೆ 
ಉಪ್ಪು ರುಚಿಗೆ
ಹಸಿಮೆಣಸು-೧
ಎಣ್ಣೆ ೨ ಚಮಚ(ಪರೋಟ  ಮಾಡುವಾಗ ಇನ್ನು ಬೇಕಾಗುತ್ತದೆ.)
ಬಿಸಿ ನೀರು- ಹಿಟ್ಟು ಕಲೆಸಲು.

ಪಾಲಕ್ ಸೊಪ್ಪನ್ನು ಸ್ವಚ್ಚಗೊಳಿಸಿ. ಕತ್ತರಿಸಿ, ಹಸಿಮೆಣಸಿನ ಕಾಯಿಯೊಂದಿಗೆ    ಬೇಯಿಸಿ,  ಆರಿದ  ಮೇಲೆ  ರುಬ್ಬಿ.
ಗೋದಿ ಹಿಟ್ಟಿಗೆ  ೨ ಚಮಚ ಬಿಸಿಮಾಡಿದ ಎಣ್ಣೆ ಹಾಕಿ. ನಂತರ ರುಬ್ಬಿದ ಮಿಶ್ರಣ  +ಉಪ್ಪು+ಜೀರಿಗೆ  ಪುಡಿ+ಅರಿಸಿನ+ ಮೆಣಸಿನ ಪುಡಿ +ಬಿಸಿ ನೀರು ಹಾಕಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ... ಉಂಡೆಗಳನ್ನಾಗಿ ಮಾಡಿ... ಲಟ್ಟಿಸಿ ಬೇಯಿಸಿ... ಬೇಯಿಸುವಾಗ ಸ್ವಲ್ಪ ಎಣ್ಣೆ ಹಾಕಿ....

ಯಾವ್ದಾದ್ರೂ ಭಾಜಿ....ಜೊತೆ...ಪಾಲಕ್ ಪರೋಟ...

ಚಂದ್ರಿಕಾ ಹೆಗಡೆ

ಆಲೂಗಡ್ಡೆ ಕಡ್ಲೆ ಕಾಳು-ರೈಸ್

ಅನ್ನ- ೩ ಕಪ್
ಆಲೂಗಡ್ಡೆ -೪ ಬೇಯಿಸಿದ್ದು
ಈರುಳ್ಳಿ-೧ ಹೆಚ್ಚಿದ್ದು
ಹಸಿಮೆಣಸಿನ ಕಾಯಿ-೧ ಹೆಚ್ಚಿದ್ದು
ಕೊತ್ತಂಬರಿ ಸೊಪ್ಪು-೨-೩ ಗಿಡ...!
ಎಣ್ಣೆ ೨-೩ ಚಮಚ
ಕಡ್ಲೆ ಕಾಳು  ನೆನಸಿ ಬೇಯಿಸಿದ್ದು-೧/೨ ಕಪ್
ನಿಂಬೆ ರಸ- ೨ ಚಮಚ
ಅರಿಸಿನ ಚಿಟಿಕೆ
ಉಪ್ಪು ರುಚಿಗೆ
ಸ್ವಲ್ಪ ಸಕ್ಕರೆ
ಸಾಸಿವೆ ಒಗ್ಗರಣೆಗೆ

ಬಾಣಲೆಗೆ ಎಣ್ಣೆ ಹಾಕಿ .ಸಾಸಿವೆ ಸಿಡಿಸಿ.... ಹಸಿಮೆಣಸಿನ ಕಾಯಿ+ಅರಿಸಿನ+ಈರುಳ್ಳಿ ಹಾಕಿ ಹುರಿಯಿರಿ. ಕಡ್ಲೆ ಕಾಳು ಸೇರಿಸಿ.
ಆಲೂ ಗಡ್ಡೆಯನ್ನು ಹಿಸುಕಿ ಹಾಕಿ. ಉಪ್ಪು ಸಕ್ಕರೆ, ಕೊತ್ತಂಬರಿ ಸೊಪ್ಪು ಮಿಕ್ಸ್ ಮಾಡಿ ೨ ನಿಮಿಷ ಬೇಯಿಸಿ. ಅನ್ನ ಸೇರಿಸಿ. ಕೊನೆಯಲ್ಲಿ ನಿಂಬೆರಸ ಹಾಕುವದರೊಂದಿಗೆ ಮುಕ್ತಾಯ......




ಅಡುಗೆ ಮನೆಯಲ್ಲೂ..... ಅದೆಂಥ ಸಂತೋಷ....


ಚಂದ್ರಿಕಾ ಹೆಗಡೆ







ಬೇಲದ ಹಣ್ಣಿನ ಪಾನಕ

ಬೇಲದ ಹಣ್ಣು-೧
ಬೆಲ್ಲ - ೧ ಕಪ್(ಬೇಕೆನಿಸಿದರೆ ಇನ್ನು ಸ್ವಲ್ಪ )
ಚಿಟಿಕೆ ಉಪ್ಪು
ಏಲಕ್ಕಿ-೨-೩
ನೀರು-೩ ಕಪ್


ಬೇಲದ ಹಣ್ಣನ್ನು ಒಡೆದು ಅದರೊಳಗಿರುವ ತಿರುಳಿಗೆ ಬೆಲ್ಲ, ಏಲಕ್ಕಿ, ಚಿಟಿಕೆ ಉಪ್ಪು , ಸ್ವಲ್ಪ ನೀರು  ಹಾಕಿ ಮಿಕ್ಸಿಯಲ್ಲಿ  ೧ ಸಲ ತಿರುವಿ. ಆಮೇಲೆ ಸೋಸಿ. ಉಳಿದ ನೀರನ್ನು ಮಿಕ್ಸ್ ಮಾಡಿ....

ಆರೋಗ್ಯಕರ ಪೇಯ....

ಆದರೆ  ಕೆಲವೊಬ್ಬರಿಗೆ ಇಷ್ಟ ಆಗೋಲ್ಲ.... ಅದರ (ಸು)ವಾಸನೆಯೇ  ಕಾರಣ....
ನನ್ನ ಮಗ, ಹಾಗು ಉದಯ್ ಬೇಡ ಅಂತ ತಿರಸ್ಕರಿಸಿದರು.... ಆದ್ರೆ ನಿಜಕ್ಕೂ ಉತ್ತಮ ಪೇಯ. ನಾನಂತೂ   ಇದನ್ನು ಇಷ್ಟ ಪಟ್ಟೆ. ನಿಮಗಿಷ್ಟವಾಗುತ್ತೋ   ಇಲ್ಲವೋ ತಿಳಿಬೇಕಾದ್ರೆ  ನೀವ್ ಮಾಡಿ ನೋಡಬೇಕಲ್ಲ....


ಚಂದ್ರಿಕಾ ಹೆಗಡೆ

28 ನವೆಂಬರ್ 2011

ಹರಿವೆ ಸೊಪ್ಪಿನ ಚಟ್ನಿ

ಹರಿವೆ ಸೊಪ್ಪು ೨ ಕಟ್ಟು
ತೆಂಗಿನ ತುರಿ- ೧ ಕಪ್
ಮೊಸರು ಕಾಲು ಕಪ್
ಹಸಿಮೆಣಸಿನ ಕಾಯಿ-೨ 
ಈರುಳ್ಳಿ- ೨ ( ಸಣ್ಣದಾಗಿ ಹೆಚ್ಚಿ/)
ಸಾಸಿವೆ,೨ ಚಮಚ ಎಣ್ಣೆ, ಕರಿಬೇವಿನ ಸೊಪ್ಪು, ಉಪ್ಪು, ಸ್ವಲ್ಪ ಸಕ್ಕರೆ , ಚಿಟಿಕೆ ಇಂಗು, ಚಿಟಿಕೆ ಅರಿಸಿನ

೧ ಚಮಚ ಎಣ್ಣೆ ಹಾಕಿ. ಹಸಿಮೆಣಸಿನ ಕಾಯಿ ಹಾಕಿ ಬಾಡಿಸಿ.
ಇದಕ್ಕೆ ತೊಳೆದು ಹೆಚ್ಚಿದ ಸೊಪ್ಪನ್ನು ಹಾಕಿ ಸಣ್ಣ ಉರಿಯಲ್ಲಿ ಬೇಯಿಸಿ. ಅರಿಸಿನ ಹಾಕಿ. (ಸೊಪ್ಪನ್ನು ಮುಚ್ಚಿ ಬೇಯಿಸಿ.....)
ಆರಿದ ಮೇಲೆ ತೆಂಗಿನ ತುರಿ+ಬೇಯಿಸಿದ ಸೊಪ್ಪು+ಉಪ್ಪ್ಪು + ಸ್ವಲ್ಪ ಸಕ್ಕರೆ=ನೀರು ಇಲ್ಲದೆಯೇ ರುಬ್ಬಿ.

ಈ ಮಿಶ್ರಣವನ್ನು  ಒಂದು ಪಾತ್ರೆಗೆ ಹಾಕಿ. ಇದಕ್ಕೊಂದು ಒಗ್ಗರಣೆ ಕೊಡಬೇಕಲ್ಲಾ......

ಒಗ್ಗರಣೆ: ೧ ಚಮಚ ಎಣ್ಣೆ ಬಿಸಿ ಮಾಡಿ, ಸಾಸಿವೆ ಸಿಡಿಸಿ, ಕರಿಬೇವು ಇಂಗು ಹಾಕಿ . ಒಗ್ಗರಣೆ ಬಿಸಿಯಾಗಿರುವಾಗಲೇ ಅದಕ್ಕೆ ಹೆಚ್ಚಿಟ್ಟ ಈರುಳ್ಳಿ   ಸೇರಿಸಿ... ಮೊದಲಿನ ಮಿಶ್ರಣಕ್ಕೆ ಸೇರಿಸಿ. ಇಲ್ಲಿ ಯಾಕೆ ಬಿಸಿ ಒಗ್ಗರಣೆಗೆ ಹಸಿ ಈರುಳ್ಳಿ  ಹಾಕಿದ್ದು ಎಂದರೆ..... ಈರುಳ್ಳಿ ಸ್ವಲ್ಪ ಬೆಂದ ಹಾಗೆ ಆಗಿ ಹಸಿವಾಸನೆ ಹೋಗಿರಲಿ ಅಂತ....
ಕೊನೆಯಲ್ಲಿ ಮೊಸರು ಸೇರಿಸಿ....ಮೊಸರು ಸೇರಿಸಿದ ಮೇಲೆ ಇನ್ನಸ್ಟು ಉಪ್ಪು ಅಗತ್ಯವೆನಿಸಿದರೆ ಸೇರಿಸಿ.

ಅನ್ನ, ಚಪಾತಿ, ರೊಟ್ಟಿ....ಜೊತೆ...ಚಟ್ನಿ 


ಚಂದ್ರಿಕಾ ಹೆಗಡೆ


26 ನವೆಂಬರ್ 2011

ಕೆಂಪು ಕ್ಯಾಬೇಜ್ ರೈಸ್- (ಕಾಳು ಮೆಣಸು ಶುಂಟಿ. ಸ್ಪೆಷಲ್ )

ಕೆಂಪು ಕ್ಯಾಬೇಜ್ ಚಿಕ್ಕದು -೧
ಶುಂಟಿ(ಹಸಿ)  ಹೆಬ್ಬರಳಿನ  ಗಾತ್ರ...!!
ಕಾಳು ಮೆಣಸು- ೧೦-೧೨
ಹಸಿಮೆಣಸು-೧
ಅರಿಸಿನ ಚಿಟಿಕೆ
ಉಪ್ಪು ರುಚಿಗೆ ತಕ್ಕಸ್ಟು
ಗ್ರೀನ್ ಚಿಲ್ಲಿ ಸಾಸ್- ೨ ಚಮಚ
ಟಮೇಟೋ ಸಾಸ್ ೧ ಚಮಚ 
ತುಪ್ಪ ೩ ಚಮಚ 
ಅನ್ನ ೨ ಬೌಲ್ 
ಜೀರಿಗೆ ೧ ಚಮಚ


ಮೊದಲು ಜೀರಿಗೆ ಶುಂಟಿ,ಕಾಳುಮೆಣಸು  ಸೇರಿಸಿ ಪುಡಿ ಮಾಡಿ. ತುಪ್ಪ ದೊಂದಿಗೆ ಕ್ಯಾಬೇಜ್ ಹಾಕಿ ಬೇಯಿಸಿ... ಹಾಗೆ ಪುಡಿ ಮಾಡಿದ ಶುಂಟಿ ಜೀರಿಗೆ,ಕಾಳುಮೆಣಸು ಸೇರಿಸಿ , ಸಾಸ್ ಎರಡನ್ನು ಹಾಕಿ, ಅರಿಸಿನ ಹಸಿಮೆಣಸು ಹೆಚ್ಚಿ ಹಾಕಿ. ಉಪ್ಪು ಹಾಕಿ....ಕೊನೆಯಲ್ಲಿ ಅನ್ನ ಮಿಶ್ರಣ ಮಾಡಿ.....



ಸರಳ ಆಹಾರ ...ಸುಲಭ ಜೀರ್ಣ....!


ಚಂದ್ರಿಕಾ ಹೆಗಡೆ

25 ನವೆಂಬರ್ 2011

ಬೆಳ್ಳುಳ್ಳಿ ರೈಸ್


ಅನ್ನ- ೧ ಕಪ್
ಬೆಳ್ಳುಳ್ಳಿ ೫-೬ ಎಸಳು
ಕರಿಬೇವು ೪-೫ ಎಲೆ
ಉಪ್ಪು
ಅರಿಸಿನ
ಎಣ್ಣೆ ೨ ಚಮಚ
ಸಾಸಿವೆ
ಹಸಿಮೆಣಸು ೨
ಸ್ವಲ್ಪ ಸಕ್ಕರೆ
ನಿಂಬೆ ರಸ ೧/೨ ಚಮಚ


ಒಗ್ಗರಣೆ ತಯಾರಿಸಿ.... ಎಣ್ಣೆಗೆ ಸಾಸಿವೆ  ಬೆಳ್ಳುಳ್ಳಿ ಹಾಕಿ ಹುರಿಯಿರಿ, ಬೆಳ್ಳುಳ್ಳಿ ರೋಸ್ಟ್  ಆಗುತ್ತಿದ್ದ ಹಾಗೆ ಹಸಿಮೆಣಸು, ಕರಿಬೇವು, ಅರಿಸಿನ ಹಾಕಿ, ಉಪ್ಪು ಸಕ್ಕರೆ ಸೇರಿಸಿ. ಅನ್ನ ಮಿಕ್ಸ್ ಮಾಡಿ. ೨ ನಿಮಿಷ ಸಣ್ಣ ಉರಿಯಲ್ಲೇ ಇಡಿ. ಸ್ವಲ್ಪ ಸಮಯದ ನಂತರ ನಿಂಬೆ ರಸ ಸೇರಿಸಿ.....

ಬಿಸಿಯಿರುವಾಗ ತಿನ್ನಲು  ರುಚಿ.... ಆಹಾ

ಬೆಳ್ಳುಳ್ಳಿ ಆರೋಗ್ಯದ ದೃಷ್ಟಿಯಿಂದ ಒಳ್ಳೇದು.....



ಚಂದ್ರಿಕಾ ಹೆಗಡೆ

ಗೋರಿ ಕಾಯಿ (ಚಿಟ್ ಮಿಟ್ಕಿ) ರೈಸ್

ಗೋರಿಕಾಯಿ ೧೦ ( ಸಣ್ಣಗೆ ಹೆಚ್ಚಿ)
ಸಾಂಬಾರ್ ಪೌಡರ್ ೨ ಚಮಚ
ಕರಿಬೇವು
ಹುಳಿಸೆ ರಸ ಕಾಲು ಚಮಚ
ಒಗ್ಗರಣೆಗೆ- ಎಣ್ಣೆ ೨ ಚಮಚ. ಸಾಸಿವೆ ೧/೨ ಚಮಚ, ಜೀರಿಗೆ ೧/೨ ಚಮಚ
ಅರಿಸಿನ ಚಿಟಿಕೆ
ಬೆಳ್ಳುಳ್ಳಿ ೩ ಎಸಳು ಸಣ್ಣಗೆ ಹೆಚ್ಚಿ< ಇಷ್ಟವಾದರೆ)
ಅನ್ನ ೨ ಕಪ್
ಹಸಿಮೆಣಸು- ೨ 
ಉಪ್ಪು 
  

ಎಣ್ಣೆ ಹಾಕಿ ಸಾಸಿವೆ ಸಿಡಿಸಿ, ಜೀರಿಗೆ ಕರಿಬೇವು ಅರಿಸಿನ ಹಾಕಿ , ಹಸಿಮೆಣಸು, ಗೋರಿಕಾಯಿ ಹಾಕಿ ಸ್ವಲ್ಪ ನೀರು ಚುಮುಕಿಸಿ ಬೇಯಿಸಿ. ಅದಕ್ಕೆ ಹುಳಿಸೆ ರಸ ಸಾಂಬಾರ್ ಪೌಡರ್ , ಉಪ್ಪು ಹಾಕಿ ೫ ನಿಮಿಷ ಹೊಂದಿಕೊಳ್ಳಲು ಸಣ್ಣ ಉರಿಯಲ್ಲೇ ಬಿಡಿ. ಕೊನೆಯಲ್ಲಿ ಅನ್ನ ಸೇರಿಸಿ.....

ಚಟ್ನಿ... ಮೊಸರಿನ ಸಲಾಡ್ ಜೊತೆಯಿರಲಿ.....

ಚಂದ್ರಿಕಾ ಹೆಗಡೆ

ಉಪ್ಪಿನ ಕಾಯಿ ದೋಸೆ

ದೋಸೆ ಹಿಟ್ಟು- ೨ ಕಪ್
ಉಪ್ಪಿನ ಕಾಯಿ - ೩ ಚಮಚ

ಹಿಟ್ಟಿಗೆ ಉಪ್ಪಿನ ಕಾಯಿ ಸೇರಿಸಿ ದೋಸೆ ಹುಯ್ಯೋದು......! ನಿಜವಾಗಲು ನಿಮಗೆ ಇಷ್ಟ ಆಗೇ ಆಗುತ್ತೆ.......
ಜೊತೆಗೆ ಮೊಸರು.....

ಚಂದ್ರಿಕಾ ಹೆಗಡೆ

ತೆಂಗಿನಕಾಯಿ ಅನ್ನ- (ಖಾರ)

ಅನ್ನ - ೧ ಕಪ್
ತೆಂಗಿನ ಕಾಯಿ  ತುರಿದು ರುಬ್ಬಿದ್ದು ೧/೨ ಕಪ್
ಸಾಂಬಾರ್ ಪುಡಿ- ೨ ಚಮಚ
ಹುಳಿಸೆ ರಸ
ಬೀನ್ಸ್ - ೧೦-೧೨ ಹೆಚ್ಚಿದ್ದು
ಮೊಳಕೆ ಕಟ್ಟಿದ ಕಡಲೆ ಕಾಳು - ಕಾಲು ಕಪ್
ಅರಿಸಿನ ಪುಡಿ
ಎಣ್ಣೆ ೨ ಚಮಚ
ಉಪ್ಪು
ಕರಿಬೇವು
  ಈರುಳ್ಳಿ ೧ ಹೆಚ್ಚಿದ್ದು


ಚಿತ್ರಾನ್ನದ ಒಗ್ಗರಣೆಯ ತರಹವೇ ಹಾಕಿ... ಇದಕ್ಕೆ ಕಡಲೆ ಕಾಳು, ಬೀನ್ಸ್ , ಈರುಳ್ಳಿ... ಬಾಡಿಸಿ. ಅರಿಸಿನ ಸಾಂಬಾರ್ ಪುಡಿ, ಹುಳಿಸೆ ರಸ ಉಪ್ಪು ಕರಿಬೇವು, ಹಾಕಿ... ರುಬ್ಬಿದ ತೆಂಗಿನ ಕಾಯಿ ಹಾಕಿ ಹಸಿ ವಾಸನೆ ಹೋಗುವ ತನಕ  ಬಿಸಿ ಮಾಡಿ... ನಂತರ ಅನ್ನ ಹಾಕಿ.... ಮೊಸರಿನ ಜೊತೆ  ಸವಿಯುವ  .... ಸಮಯ....


ಚಂದ್ರಿಕಾ ಹೆಗಡೆ


17 ನವೆಂಬರ್ 2011

ನೆಲ್ಲಿ ಕಾಯಿ ತಂಬುಳಿ

ನೆಲ್ಲಿ ಕಾಯಿ ೨-೩ ( ಹೆಚ್ಚಿಟ್ಟುಕೊಳ್ಳಿ)
ತೆಂಗಿನ ತುರಿ- ೧/೨ ಕಪ್
ಮಜ್ಜಿಗೆ1ಕಪ್
ಉಪ್ಪು  ರುಚಿಗೆ
ಹಸಿಮೆಣಸು 1
ಸಕ್ಕರೆ ಸ್ವಲ್ಪ
ಒಗ್ಗರಣೆಗೆ- ಸಾಸಿವೆ , ಎಣ್ಣೆ, ಇಂಗು ಚಿಟಿಕೆ, ಕರಿಬೇವು 

ನೆಲ್ಲಿ ಕಾಯಿ ಚೂರು, ತೆಂಗಿನ ತುರಿ ಹಸಿಮೆಣಸು ಸಕ್ಕರೆ ಇವುಗಳನ್ನು ಮಜ್ಜಿಗೆಯಲ್ಲೇ  ರುಬ್ಬಿ. ಉಪ್ಪು ಸೇರಿಸಿ.

ಇದಕ್ಕೆ ಒಗ್ಗರಣೆ ಕೊಡಿ.

ಇದು ನೆಲ್ಲಿ ಕಾಯಿ ಸೀಸನ್ .... ನೆಲ್ಲಿ ಕಾಯಿ ತಂದು ಒಣಗಿಸಿತ್ತುಕೊಂಡರೆ ವರ್ಷ ಪೂರ್ತಿ ತಂಬುಳಿಯ ಸವಿ ನಿಮ್ಮದಾಗುವದು...


ಚಂದ್ರಿಕಾ ಹೆಗಡೆ.

ಪಾವ್ ಭಾಜಿ

ಪಾವ್- ೬



ಭಾಜಿಗೆ:

ಆಲೂ- ೪-೫(ಬೇಯಿಸಿ-)
ಈರುಳ್ಳಿ ೨-೩ 
ನಿಂಬು-೧/೨
ಕೊತ್ತಂಬರಿ ಸೊಪ್ಪು -೪-೫ ಗಿಡ...!
ತುಪ್ಪ ಅಥವಾ ಬೆಣ್ಣೆ 


ಆಲೂ ಬೇಯಿಸಿ.. ಸಿಪ್ಪೆ ತೆಗೆದು ಕಿವುಚಿ ಕೊಳ್ಳಿ. ಇದಕ್ಕೆ ಪಾವ್ ಭಾಜಿ ಮಸಾಲ ವನ್ನು ಸೇರಿಸಿ( ಮಸಾಲ ಪುಡಿ ಮಾಡುವ ವಿಧಾನ ಹೇಳುವ ತನಕ  ರೆಡಿ ಮಸಾಲ ಬಳಸಿ...! ) ರುಚಿಗೆ ಉಪ್ಪು. ಹಾಕಿ



ಒಲೆಯಿಂದ ಇಳಿಸಿದ ಮೇಲೆ ಕೊತ್ತಂಬರಿ ಸೊಪ್ಪು. ಈರುಳ್ಳಿ.. ನಿಂಬೆರಸ ಸೇರಿಸಿ....

ಪಾವ್ ಅನ್ನು ಮಧ್ಯದಲ್ಲಿ ಕಟ್ ಮಾಡಿ ತುಪ್ಪ ಅಥವಾ ಬೆಣ್ಣೆ ಸವರಿ ಬಿಸಿ ಮಾಡಿ.... ಸಿದ್ದವಾದ ಭಾಜಿಯೊಂದಿಗೆ ಸವಿಯಿರಿ....


ಚಂದ್ರಿಕಾ ಹೆಗಡೆ

ಟಮೇಟೋ ಕಾಯಿ ಚಟ್ನಿ

ಟಮೇಟೋ ಕಾಯಿ- ೩-೪
ಕಡಲೇಬೀಜ (ಶೇಂಗ)- ೧ ಕಪ್
ಹಸಿಮೆಣಸಿನ ಕಾಯಿ-೩-೪
ಬೆಲ್ಲ ಸ್ವಲ್ಪ
ಎಣ್ಣೆ  ೨ ಚಮಚ
ಸಾಸಿವೆ ೧/೨ ಚಮಚ
ಇಂಗು ಚಿಟಿಕೆ 
ಉಪ್ಪು 

ಟಮೇಟೋ ಕಾಯಿ, ಎಣ್ಣೆ ಹಾಕಿ ಹುರಿಯಿರಿ... ಅರ್ಧ ಬೆಂದಾಗ ಕಡಲೆ ಬೀಜ, ಹಸಿಮೆಣಸು ಸೇರಿಸಿ ಸ್ವಲ್ಪ ಹುರಿಯಿರಿ

ಆರಿದ ಮೇಲೆ ಈ ಹುರಿದ ಪದಾರ್ಥ ಜೊತೆಗೆ ಬೆಲ್ಲ ,ಉಪ್ಪು,ಹಾಕಿ ರುಬ್ಬಿ. ಸಾಸಿವೆ ಇಂಗಿನ ಒಗ್ಗರಣೆ... ಹಾಕಿ....

ಈ ಚಟ್ನಿ  ತಾಲಿಪಿಟ್ಟು, ರೊಟ್ಟಿ, ಚಪಾತಿಗೇನೆ.....ಚೆನ್ನಾ! 



ಚಂದ್ರಿಕಾ ಹೆಗಡೆ

ಸುವರ್ಣ ಗಡ್ಡೆಯ ಪಲ್ಯ (ಪಂಜರ ಗಡ್ಡೆ)

ಸುವರ್ಣ ಗಡ್ಡೆ- ಹೋಳುಗಳನ್ನಾಗಿ  ಮಾಡಿ- ೧ ಕಪ್
ಹುಳಿಸೆ ರಸ - ೨ ಚಮಚ
ಹಸಿಮೆಣಸು-೨-೩
ತೆಂಗಿನ ತುರಿ- ಸ್ವಲ್ಪ
ಎಣ್ಣೆ ೩ ಚಮಚ
ಕರಿಬೇವು ೫-೬ ಎಸಳು
ಉದ್ದಿನ ಬೇಳೆ- ೧/೨ ಚಮಚ
ಸಾಸಿವೆ ೧/೨ ಚಮಚ
ಬೆಲ್ಲ- ೨ ಚಮಚ
ಅರಿಸಿನ ಪುಡಿ , ಉಪ್ಪು

ಸುವರ್ಣ ಗಡ್ಡೆಯ ಹೋಳುಗಳನ್ನು  ಮೊದಲು ಕುಕ್ಕರ್ನಲ್ಲಿ ಬೇಯಿಸಿಕೊಳ್ಳಿ. ಆರಿದ ಮೇಲೆ ಬಾಣಲೆಗೆ  ಎಣ್ಣೆ ಸಾಸಿವೆ ಉದ್ದಿನ ಬೇಳೆ ಹಸಿಮೆಣಸು ಹಾಕಿ ಒಗ್ಗರಣೆ ಸಿದ್ದಪಡಿಸಿ. ಇದಕ್ಕೆ ಬೇಯಿಸಿಟ್ಟುಕೊಂಡ ಹೋಳುಗಳನ್ನು ಹಾಕಿ, ಬೆಲ್ಲ, ಉಪ್ಪು, ಅರಿಸಿನ ಪುಡಿ, ಹುಳಿಸೆ ರಸ  ಸೇರಿಸಿ. ಎಲ್ಲ ಹೊಂದಿಕೊಂಡ ಮೇಲೆ...ತೆಂಗಿನ ತುರಿ ಹಾಕಿ....

ತಿನ್ನಿ.....!



ಇನ್ನೊಂದು ವಿಷಯ--- ಸುವರ್ಣ ಗಡ್ಡೆ- ಎಸ್ಟೋರೋಗಗಳಿಗೆ ಪರಿಹಾರವನ್ನು ನೀಡಬಲ್ಲದು ಎಂದು ಓದಿ- ಕೇಳಿದ ವಿಷಯ , ಅದರಲ್ಲೂ   ಮೂಲವ್ಯಾದಿಯ ಪರಿಹಾರಕ್ಕೆ ರಾಮಬಾಣ ದಂತೆ ಎಂಬುದು ಆಯುರ್ವೇದ ತಜ್ಞರ ಅಭಿಪ್ರಾಯ.....

ಚಂದ್ರಿಕಾ ಹೆಗಡೆ

ಮೆಂತೆ ಪಲಾವ್

ಮೆಂತೆ ಸೊಪ್ಪು ಸ್ವಚ್ಚ ಮಾಡಿದ್ದು- ೨ ಕಟ್ಟು
ಅಕ್ಕಿ -೨ ಕಪ್
ಕಸೂರಿ ಮೇಥಿ- ಸ್ವಲ್ಪ
ತುಪ್ಪ ೨ ಚಮಚ
ಹಾಲು ೧ ಕಪ್
ಬೆಳ್ಳುಳ್ಳಿ-೨ ಎಸಳು ಮಾತ್ರ
ಪಲಾವ್ ಎಲೆ-೩ 
ಕಾಳು ಮೆಣಸು-ಲವಂಗ ೫-೬
ಟೋಮೇಟೋ  ಸಾಸ್ - ೧ ಚಮಚ
ಗ್ರೀನ್ ಚಿಲ್ಲಿ ಸಾಸ್ - ೧ಚಮಚ 
ಹಸಿಮೆಣಸು-೨ 
ಉಪ್ಪು

ಬೆಳ್ಳುಳ್ಳಿ, ಕಾಳುಮೆಣಸು, ಲವಂಗ ಪುಡಿಮಾಡಿ. ಅಕ್ಕಿ ತೊಳೆದು ಮೇಲಿನ ಎಲ್ಲ ಸಾಮಗ್ರಿಗಳನ್ನು ಹಾಗು ಈ ಪುಡಿಯನ್ನು ಸೇರಿಸಿ, ೩ ಕಪ್ ನೀರು ಹಾಕಿ. ಕುಕ್ಕರ್ ನಲ್ಲಿ ಇಡಿ. ೩ ಕೂಗು  ಆಗಲಿ!
ಇದರ ಜೊತೆ ಸವತೆಕಾಯಿ, ಈರುಳ್ಳಿ ಮೊಸರಿನ  ಸಲಾಡ್ ಇರಲಿ....

ಸವಿಯಾದ.... ಈ ಸಮಯ.... ಎಲ್ಲರದೂ  ಆಗಲೆಂದೇ ಈ ಬ್ಲಾಗ್

ಚಂದ್ರಿಕಾ ಹೆಗಡೆ

ಅಲಸಂದೆ (ಸೋಡಿಗೆ) ಪಲ್ಯ

ಅಲಸಂದೆ  ಚಿಕ್ಕದಾಗಿ ಹೆಚ್ಚಿದ್ದು- ೧ ಕಪ್ 
ಹಸಿಮೆಣಸು -೧ ಹೆಚ್ಚಿದ್ದು 
ಎಣ್ಣೆ ೨ ಚಮಚ
ಕರಿಬೇವು ೫-೬ ಎಸಳು
ಅರಿಸಿನ , ಉಪ್ಪು, ಸಾಸಿವೆ(ಒಗ್ಗರಣೆಗೆ)
ತೆಂಗಿನ ತುರಿ ಸ್ವಲ್ಪ 

ಬಾಣಲೆಯಲ್ಲಿ ಎಣ್ಣೆ  ಹಾಕಿ ಬಿಸಿ ಮಾಡಿ ಸಾಸಿವೆ ಚಟ್ ಪಟ್ ಮಾಡಿ... ಹಸಿಮೆಣಸು, ಕರಿಬೇವು, ಅರಿಸಿನ ಹಾಕಿ, ಹೆಚ್ಚಿಟ್ಟ ಅಳಸಂದೆಯನ್ನು ಸೇರಿಸಿ, ಸ್ವಲ್ಪ ನೀರು ಚುಮುಕಿಸಿ  ಸಣ್ಣ ಉರಿಯಲ್ಲಿ ೭-೧೦ ನಿಮಿಷ ಬೇಯಿಸಿ.... ಉಪ್ಪು ಹಾಕಿ ಸ್ವಲ್ಪ ಸಣ್ಣ ಉರಿಯಲ್ಲೇ ಇಡಿ. ಗ್ಯಾಸ್ ಆರಿಸಿದ ಮೇಲೆ  ತೆಂಗಿನ ತುರಿ ಸೇರಿಸಿ.

ಸವಿದ ಘಳಿಗೆ ನನ್ನದು.....


ಚಂದ್ರಿಕಾ ಹೆಗಡೆ