ಅಗತ್ಯ : ಕಲ್ಲಂಗಡಿ ಹಣ್ಣಿನ ಸಿಪ್ಪೆ.*( ಅಗತ್ಯವಿರುವಸ್ಟು)
ಈರುಳ್ಳಿ
ಸ್ವಲ್ಪ ಗರಂ ಮಸಾಲ ಪುಡಿ
ನಿಂಬೆರಸ ೧ ಚಮಚ
ಅರಿಸಿನ ಅರ್ಧ ಚಮಚ
ಒಗ್ಗರಣೆಗೆ ಸಾಸಿವೆ, ಎಣ್ಣೆ.
ಕರಿಬೇವು. ಹಸಿಮೆಣಸು ರುಚಿಗೆ ಉಪ್ಪು
ತಡವಿನ್ನೇಕೆ :
ಕಲ್ಲಂಗಡಿ ಹಣ್ಣಿನ ಸಿಪ್ಪೆಯ ಹೊರಗಿನ ಗಟ್ಟಿ ಭಾಗವನ್ನು ತೆಗೆದು ಸಣ್ಣ ದಾಗಿ ಹೆಚ್ಚಿಕೊಳ್ಳಿ.
ನೆನಪಿರಲಿ ಹಣ್ಣಿನ ಮೆತ್ತಗಿನ ಭಾಗವನ್ನು ತೆಗೆಯಬೇಕು.
ನಂತರ... ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ಸಾಸಿವೆ ಸಿಡಿಯುವಾಗ ಹಸಿಮೆಣಸು.. ಕರಿಬೇವು ಈರುಳ್ಳಿ ಹೆಚ್ಚಿಟ್ಟ ಕಲ್ಲಂಗಡಿ ಚೂರು ಅರಿಸಿನ ಹಾಕಿ ಸಣ್ಣ ಉರಿಯಲ್ಲಿ ಬೇಯಿಸಿ... ನೀರನ್ನು ಹಾಕುವ ಅಗತ್ಯವಿಲ್ಲ.
ಸ್ವಲ್ಪ ಬೆಂದ ಮೇಲೆ ಗರಂ ಮಸಾಲ ಹಾಕಿ ಮತ್ತೆ ಸ್ವಲ್ಪ ಬೇಯಿಸಿ ಬೆಂದ ಮೇಲೆ ಉಪ್ಪು ಹಾಕಿ...೨ ನಿಮಿಷ ಬೇಯಿಸಿ... ನಿಂಬೆ ರಸ ಸೇರಿಸಿ ...ತೆಂಗಿನ ಕಾಯಿ ಬೇಕು ಅಂದವರು ಧಾರಾಳವಾಗಿ ಬಳಸಿ...
ಅತ್ಯಂತ ರುಚಿಕರವೆಂದು ನನ್ನ ಅಭಿಪ್ರಾಯ... ನಿಮ್ಮದು ಆಗಬೇಕಾದರೆ ಒಮ್ಮೆ ಈ ಪಲ್ಯ ತಯಾರಿಸಿ ನೋಡಿ....
ಹಣ್ಣಿನ ಜೊತೆ fridge ನಲ್ಲಿ ಸಿಪ್ಪೆಗೂ ಜಾಗ!
ಆರೋಗ್ಯಕರ ಅಡುಗೆ ....ಸಂತೃಪ್ತಿಯ ಹೊಗಳಿಕೆಯಲ್ಲಿ
ಚಂದ್ರಿಕಾ ಹೆಗಡೆ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ